Saturday, 27 June 2015

ಕನಸುಗಳು ಮಾರಾಟಕ್ಕಿವೆ

ಕನಸುಗಳು ಮಾರಾಟಕ್ಕಿವೆ ಕೊಳ್ಳಲು ಯಾರಿದ್ದಿರಾ?
ಕಾಲನ ಬರಸಿಡಿಲು ಬಡಿದು ಕರಕಲಾದ ನನ್ನ ಕನಸುಗಳು
ಅವಳ ಕಾಲಿನ ಹಿಮ್ಮಡಿಯಲಿ ಸಿಕ್ಕು ಚೂರಾದ ಮನಸಿನಲಿ
ಅಳಿಯದೆ ಉಳಿದ ಹಲವು ನೆನಪುಗಳಲಿ
ಕನಸುಗಳು ಮಾರಾಟಕ್ಕಿದೆ ಕೊಳ್ಳಲು ಯಾರಿದ್ದಿರಾ?
ಬೋರ್ಗರಿವ ಮಳೆಯಲಿ ಕೊರೆಯುವ ಚಳಿಯಲಿ
ಪಾಚಿಗಟ್ಟಿದ ಕುಚದ ಹಿಂದೆ
ಒಡೆದ ಹೃದಯದಲಿ ಕೊಳೆತ ಮನಸಿನಲಿ
ಬೆಚ್ಚಗೆ ಕೊರೆಯುತ್ತ ಕುಳಿತಿರುವ
ನನ್ನ ಕನಸುಗಳು ಮಾರಾಟಕ್ಕಿವೆ ಕೊಳ್ಳಲು ಯಾರಿದ್ದಿರ?
ಕಡು ರಾತ್ರಿಯ ಪ್ರೀತಿಯ ಸುಡುಬಿಸಿಲಿನಲ್ಲಿ
ಕೂಗಿದೆ ನಂತರ ಕೊರಗಿದೆ
ಅವಳ ಯೋಚನೆಯಲು ನಿಡುಸೂಯ್ದು ಹಾರಾಡಿದೆ
ಕೊನೆಗೆ ತಹಬದಿಗೆ ಬಂದು
ಬದುಕಿನಲಿ ಹೊಸಪುಟ ತೆರೆಯಲು ಕರದ ಅವಶ್ಯಕತೆಗೆ
ಬನ್ನಿ ನನ್ನ ಕನಸುಗಳು ಮಾರಾಟಕ್ಕಿವೆ ಕೊಳ್ಳಲು ಯಾರಿದ್ದಿರ?

ನಿನ್ನ ನೆನಪು

ಇಂದು ಏಕೊ ನಿನ್ನ ನೆನಪು
ಎದೆಯಾಂತರಾಳದ ಹುದುಗಿದ ಕನಸುಗಳಲ್ಲಿ ಚಡಪಡಿಕೆ
ಹಾಕಿದ ನೋವಿನ ಸರಪಣಿಂದಾಚೆ ಬರುವ ಹವಣಿಕೆ.
::::::::
ಕಾಲದ ಸುಡು ವಿರಹದ ಬಾಯಾರಿಕೆಯಲಿ ನಿಂತಿರುವೆ
ನಿನ್ನ ಮನದ ಮರಭೂಮಿಯಲಿ
ಪ್ರೀತಿಯ ಒಯಾಸ್ಸಿಸ್ಸ ಸಿಡಿಯಬಹುದೆ?
:;;;;;;;;;;
ಹೇಳು ಗೆಳತಿ ಕವಿದ ಮೊಡವ ಸರಿಸಿ
ಪ್ರೀತಿಯ ಬೆಳಕ ಹುಯ್ಯಬಾರದೆ
ಬರ ಸಿಡಿಲು ಬಡಿದ ಬರಡು ಹೃದಯಕ್ಕೆ ಆಸೆಯ ಚಿಗುರು ನಿನಾಗಬಾರದೆ?
::;;;::::::
ನೂರುಬಾರಿ ಕ್ಷಮೆ ಕೇಳಿದವನ
ಒಂದೇ ಒಂದು ಬಾರಿ ಕ್ಷಮಿಸಬಾರದೆ?
ಕತ್ತಲು ಕವಿದಿರುವ ಈ ಎದೆಗೆ ನಿನ್ನ
ನಗೆಯ ಬೆಳದಿಂಗಳನು ಸುರಿಯಬಾರದೆ?

ನೀರೆ..! ನೀರೆ

ನೀರೆ..! ನೀರೆ.....! ಕಣ್ಣೀರೆ!! ಈ ಹಾಡು ತುಂಬಾ ಕಾಡುತ್ತೆ, ರಾತ್ರಿ ಹಗಲು ಆಫೀಸ್ ಮನೆ ಎಲ್ಲ ಕಡೆ ಗುನಗ್ತಾ ಇರ್ತೀನಿ, ಮಲೆಗಳಲ್ಲಿ ಮಧು ಮಗಳು ನಾಟಕದಲ್ಲಿ ಒಂದು ಸನ್ನಿವೇಶದಲ್ಲಿ ಈ ಹಾಡು ಬರುತ್ತೆ. ಕಾವೇರಿ ಎಂಬ ಹೆಣ್ಣು ಮಗಳು ಕಾಮಾಂದರ ದೃಷ್ಟಿಗೆ ಬಿದ್ದು ಅವರ ಮೋಸದ ಬಲೆಯ ಹೊಕ್ಕು ಕೊನೆಗೆ ಬಾವಿಗೆ ಹಾರಿದಾಗ ಬರುವ ಹಾಡಿದು, ಸಂಗೀತ ಹಂಸಲೇಖ ಅವರದು, ಭಾವುಕ ಮನಸ್ಸಿನ ನನಗೆ ನಾಟಕ ನೋಡಿ ೧೫ ದಿವಸ ಆದರು ಆ ಹಾಡು ಇನ್ನು ಸ್ಮೃತಿ ಪಟಲದಿಂದ ಹೋಗಿಲ್ಲ, ಹೆಣ್ಣಿನ ಅಂತರಂಗದ ನೋವು ಬಹಿರಂಗದ ಹಿಂಸೆ ಅವಳ ಮೇಲಿನ ದೌರ್ಜನ್ಯ ಬರಿ ಆ ಸಂಗೀತದ ಶಬ್ದದಲ್ಲೇ ಅಡಕವಾಗಿದೆ. ಗಂಡಿನ ಅಮಾನುಷ ಕಾಮ ವಂಚನೆಗೆ ಅನೇಕ ಹೆಣ್ಣುಮಕ್ಕಳ ಬಲಿಯಾಗಿವೆ, ಇದಕ್ಕೆ ಕೊನೆ ಏಂದು! ಎನ್ನುವದು ಆ ಬಗವಂತನೆ ತಿಳಿಸಬೇಕು? ಆಗಿನ ಕಾವೇರಿಯಿಂದ ಹಿಡಿದು ಈಗಿನ ನಿರ್ಭಯಾಳ ರಕ್ತ ಮಾಂಸದ ಮುದ್ದೆ ಕೂಗಿ ಕೂಗಿ ಹೇಳ್ತಾ ಇದೆ ಬದುಕಿ ಬದುಕಲು ಬಿಡಿ....

ನಿನ್ನ ಚಲುವಿನ ಸೊಬಗಿಗೆ

ಬಾ ಪ್ರೇಯಸಿಯೆ ಎಂತು ಬಣ್ಣಿಸಲು ನಿನ್ನ ಒಲುಮೆಯನು
ನನ್ನ ಕನಸಿನ ಹಂದರದ ಮಧುಗಂಬ ನೀನು
ಹಂದರವೆಲ್ಲ ನಿನ್ನ ಒಲುಮೆಯ ಘಾಟಿಗೆ ಮದವೇರಿದೆ
ತರುಲತೆಗಳೆಲ್ಲಾ ಢಾಳಾಗಿ ಅರಳಿ ನಿಂತಿವೆ ನಿನ್ನ ಚಲುವಿನ ಸೊಬಗಿಗೆ
ನನ್ನ ಕನಸಿನ ಒಡ್ಡೊಲಗದ ಸುಕದರಸಿ ನೀನು
ನಿನ್ನ ಕಂಗಳದ ಕಾಂತಿಯೆ ನನ್ನ ಅರಮನೆಯ ಬೆಳಕು
ನಿನ್ನ ಮೊಗದ ಹೊಳಪೆ ಹಗಲು, ನಿನ್ನ ಕೇಶರಾಸಿಯ ನೇರಳೆ ಇರುಳು
ನಿನ್ನ ನಗುವೆ ಚಂದ್ರ, ನಿನ್ನ ನಡೆಯೆ ಕಾಲಚಕ್ರ
ಒಟ್ಟಿನಲಿ ನೀನಿಲ್ಲದೆ ಕನಸಿಲ್ಲ ಆ ಕನಸಿದಿಲ್ಲದೆ ನಾನಿಲ್ಲ

Shivanna Gundanavar

ಗುರಿಯಿರದೆ ಬಿಟ್ಟ ಬಾಣ

ಯಾರೋ ಗುರಿಯಿರದೆ ಬಿಟ್ಟ ಬಾಣ,
ಬಂದು ನಾಟಿದೆ ನನ್ನೆದೆಯ.

ಸುರಿವ ಪ್ರೀತಿ ನೆತ್ತರ ಕಂಡು,
ಕೆಂಪೆಂದು ಕುಣಿದಿದೆ ನನ್ನಿ ಹೃದಯ

ಬರಿದೆ ಪದವಲ್ಲದ ಈ ಹಾಡ, 
ನೀ ಬಂದು ಕೇಳುವುದೆಂದು ?

ಮತ್ತೊಮ್ಮೆ ಮಿನುಗಲಿ ನಿನ್ನ ನಗೆಯು, 

ನನ್ನ ಮನದ ಮುಗಿಲಲಿ ಇಂದು.

ಕಾದಿರುವೆ ನನ್ನೊಲವೆ ಬಾ ಬೇಗ ಅಭಿಸಾರಿಕೆ,

 ನನ್ನ ಹೃದಯದ ಸಾಗರಕೆ.

ಕೊರೆವ ಹಾಡಾಗಿದೆ

ಕೊರೆವ ಹಾಡಾದಗಿದೆ ನಿನ್ನ ಒಲುಮೆಯ ನೆನಪು,
ಕೊಲುತಿದೆ ನನ್ನ ಮನವ ಪ್ರತಿಕ್ಷಣ.
ನಡು ಮುರಿದ ಎದೆ ಮನೆಯೊಳಗೆ,
ನಗುತಿದೆ ಕಾಲ್ಮುರಿದ ಕವನ.
ಕೊನೆಯಿಲ್ಲ ನನ್ನ ಒಲುಮೆಯ ಗೊಂದಲಕೆ
ನೀ ಬಿಟ್ಟ ನೀರಿಗೆ ಮೀನಾಗಿ ಇಂದು ಬಿದ್ದಿಹೆ ನಿನ್ನ ಗಾಳಕ್ಕೆ
ಉಸಿರಿಗೆ ಉಸಿರಾಗುವೆ ಎಂದು ಮನವ ಹೊಕ್ಕೆ
ಬಿಟ್ಟು ಹೋದ ಮರುಗಳಿಗೆ ನನಗೆ ಸಿಕ್ಕಿಸಿದರು ಕೊಕ್ಕೆ

ಹಸಿರಾಗಿರು ಹೊಸದಾಗಿಬೇಡ

‪#‎ನೀ‬ ‪#‎ಹಸಿರಾಗಿರು‬ ‪#‎ಹೊಸದಾಗಬೇಡ‬
ನೆನಪುಗಳು ಹಸಿಯಾಗಿವೆ ಮತ್ತೊಂದು ಮುಂಗಾರಿಗೆ ಸಿಕ್ಕಿ
ನೀ ಇಟ್ಟ ಹೆಜ್ಜೆ ಗುರುತು ಮತ್ತೆ ಕೆಸರಲಿ ಸಮಾಧಿಯಾಗಿದೆ
ಸಮಾಧಿಯ ಬುಡದಲಿ ನಿನ್ನೊಲುಮೆಯ ಬೇರಲಿ ಏನೊ ಚಡಪಡಿಕೆ
ಆ ಒಲುಮೆ ಬೇರು ಮತ್ತೆ ಚಿಗುರಾಗಿ ಮೆಲ್ಬರುವ ಹವಣಿಕೆ
ಅಯ್ಯೊ ಬೇಡ ಚಿಗುರೆ ಮತ್ತೊಂದು ಒಲುಮೆಯ ಹೆಜ್ಜೆ ಮೇಲ್ಗಡೆ ಕಾದಿದೆ
ನೀನು ಸಮಾದಿಯ ಒಳಗಿನ ಹೊ ಅಷ್ಟೆ,
ನೀ ಈನ್ನೂ ನನ್ನ ಸುಪ್ತ ನೆನಪಿನ ಕನಸು
ಆ ಕನಸಿನ ಸಮಾದಿಯ ಮೇಲೆ ಚಿಗಿಯುತ್ತಿದೆ ಮತ್ತೊಂದು ಹೊಸ ಚಿಗುರು.
ನೀ ಹಸಿರಾಗಿರು ಹೊಸದಾಗಿಬೇಡ.....!!!

ಸೆಗಣಿಯ ಮೇಲಿನ ‪ಸಂಕ್ರಾಂತಿ‬ ‪ಹೂ


ಸೆಗಣಿಯ ಮೇಲಿನ ಸಂಕ್ರಾಂತಿ‬ ಹೂ‬

ಸಂಜೆ ೬ ರ ಹೊತ್ತಿಗೆ, ಊರ ಹೊರಗೆ ನಿರ್ಜನ ಪ್ರದೇಶ ಒಂಟಿ ಬೈಕ ಸವಾರ ನಾನು. ಆಗ ತಾನೆ ಮಾಹಾ ನಗರಿಯ ಗಿಜಿಗಿಡುವ ಪರಿಸರವನ್ನು ದಾಟಿ ಊರ ಹೊರಗೆ ನೆಮ್ಮದಿ ಹುಡುಕಿಕೊಂಡು ಬಂದಾಗಿತ್ತು ಅಲ್ಲಿ. ನಿರವಯ ಮೌನದ ಆ ಪ್ರದೇಶದಲಿ ತಾನಾಗೆ ಹಳೆ ನೆನಪುಗಳು ಉಕ್ಕಿ ಕಣ್ಣುಗಳು ತೇವದಿಂದ ಮಂಜಾಗಿ ಹೊರ ಕತ್ತಲಿನ ಜೊತೆ ಒಳ ಮನಸ್ಸು ಭಾರವಾಗಿತ್ತು. ಜೇಬು ತುಂಬಾ ದುಡ್ಡಿದೆ, ತಲೆ ತುಂಬಾ ಆಸೆ ಇದೆ ಆದರೇನು ನೆಮ್ಮದಿಯಿಲ್ಲ ಅದೇನೋ ವಿವರಿಸಲಾಗದ ಯಾತನೆ, ಸುಳಿವ ಗಾಳಿಯಲ್ಲಿ ಅದೇನೋ ನೋವಿನ ಕೂಗು, ಮನಸ್ಸಿನಲಿ ಗೊಂದಲ. ಅದಕ್ಕೆಲ್ಲ ಉತ್ತರಗಳಿರಲಿಲ್ಲ ನನ್ನ ಹತ್ತಿರ, ಕಣ್ಣ ಕಂಬನಿ ಮಾತ್ರ ಸಾಂತ್ವನ ಹೆಳಬಯಸಿದಂತಿತ್ತು. ಹಳ್ಳಿ ಹೈದನ ದಿಲ್ಲಿಯ ಕನಸುಗಳು ಅದುದ್ದೆನೋ ನಿಜ, ಆದರೆ ಸತ್ತಿದ್ದು ಸ್ವಂತ ಕನಸು ಜೊತೆಗೆ ನೆಮ್ಮದಿ. ಅದು ಅಮ್ಮನ ಮಮತೆ, ಅಪ್ಪನ ವಾತ್ಸಲ್ಯ, ಗೆಳೆಯರ ಪ್ರೀತಿ, ಹಳ್ಳಿಯ ಗೆಳತಿ, ಪಾಠದ ಶಾಲೆ, ಇಷ್ಟವಾಗದೆ ಮೇಷ್ಟ್ರು, ತೋಟದ ಮನೆ, ಎತ್ತು ಎಮ್ಮೆ, ಊರಿನ ದೇವರಗುಡಿ, ಅಗಸಿ ಬಾಗಿಲು, ಚಿಕ್ಕ ರಸ್ತೆ, ಕೆಂಪು ಬಸ್ಸು ಹೀಗೆ ಹಲವು ಹತ್ತುಗಳು ಕೊಟ್ಟಷ್ಟು ನೆಮ್ಮದಿ, ಹೊಟ್ಟೆ ಪಾಡಿನ ಪಟ್ಟಣದ ಕಾರು ಬೈಕು, ಪಬ್ಬು ಬಾರು, ಥಿಯಟರು, ಗರ್ಲಪ್ರೇಂಡ್ಸು, ವೀಕೆಂಡ ಪಾರ್ಟಿ, ಟೀಮ್ ಜೌಟಿಂಗ, ಇವುಯಾವು ನೆಮ್ಮದಿ ಕೊಡಲಾರವು ಹಳ್ಳಿ ಹುಡುಗರಿಗೆ. ಕಾರಣ ಇವರಿಗೆನಿದ್ರು ಪಟ್ಟಣ ಸೆಗಣಿಯ ಮೇಲಿನ ಸಂಕ್ರಾಂತಿ ಹೂ ಇದ್ದಂತೆ

ಹಗಲುಗಲುಗನಸಿನ ರಾಜಕುಮಾರ

ಹಗಲುಗಲುಗನಸಿನ ರಾಜಕುಮಾರ
ನನಗಿಲ್ಲ ಯಾವ ಬೇಲಿಯ ಮಮಕಾರ
ಕಲ್ಪನೆಗೆ ನಿಲುಕದು ನನ್ನ ಭಾವದ ವಿಸ್ತಾರ
ಒಂಟಿ ಬದುಕಿನ ಕಹಿರಸದ ಸಿಹಿಯಲ್ಲೆ, ಹೊಗುತಿಯೇ ಕಾಲಿಬಂಡಿಯ ಸರದಾರ!!!!!!!!
ಬದುಕು ಬಾರವಾಗಿದೆ ಬಾವನೆಗಳು ತುಂಬಿ
ಅವನ್ನು ತೂಗುಹಾಕಲು ಬೇಕಾಗಿದೆ ಒಲುಮೆಯ ತಂತಿ.
ಹುಡುಕುತಿಹೆ ಬೇಲಿಯ ಒಳಗೂ ಹೊರಗೂ
ಕಂಡದ್ದು ಮಾತ್ರ ನಿಶಾಚರ ಬೆಳಕೂ ಆ ಬೆಳಕಿನಲಿ ನಲಿವಿನ ಆಶೆಗಳೂ
.!!!!!!

ಚೆಲುವೆಯ ನೆನದು

ಕಾಣದಿಹ ಚೆಲುವೆಯ ನೆನದು ದಿನವು ಚಡಪಡಿಕೆ ರಾತ್ರಿಗಳು
ಪ್ರೀತಿಯ ಬಸಿರಿಂದ ಹರಿದ ಚಾಪೆಯ ಮೇಲೆ ಹಡೆದ ನೂರೆಂಟು ಕನಸುಗಳು!
ಹೊದೆವ ಕಂಬಳಿಯ ತೂತುಗಳು ಈಗ ಕಿವಿಯಾಗಿವೆ
ನಾ ಬಿಡುವ ಪ್ರತಿ ಉಸಿರಿನಲು ಕೆಳದ ನಿನ್ನ ಹೆಸರಿವೆ

ಕಾರ್ಮೂಗಿಲ ಮದ್ಯದಲಿ ಮೂಡುವ ಕೊಲ್ಮಿಂಚೆ ನೀನು
ಕಾರ್ಗತ್ತಲಿನಲಿ ಕಂಡ ಮಿಂಚು ಹುಳದ ಬೆಳಕಲಿ ನಿನಿರುವೇನು?
ನೀರಾಸೆಗಳೆ ಬೆಂಬತ್ತಿ ಭೂತಗಳಾಗಿವೆ
ಭವಿಷ್ಯದ ಪ್ರೀತಿಗೆ ಓಡುವ ಓಘಕ್ಕೆ ಬದುಕು ಬಲಿಯಾಗಿದೆ!!
ಜೀವನದ ಓಟಕ್ಕೆ ಕೊನಿಯಿಲ್ಲ ಆದರೆ ಕಾಲವಿದೆ
ಆ ಕಾಲನ ಕೈಯಲ್ಲಿ ಬದುಕಿದೆ, ಆದರೆ ನೀನು???
?

ಪ್ರೀತಿಯೇ ಎಲ್ಲಕ್ಕಿಂತ ಮೇಲು

ನನ್ನ ನಿನ್ನ ಮನದ ಮಾತುಗಳು ಏಕೊ ಮೌನವಾಗವೆ
ನಿರ್ಲಿಪ್ತತೆಯ ಕನಸಿನ ಭಾವವು ಮನಸಾವರಿಸಿವೆ
ದೂರದಲಿ ನಿನ್ನ ಕಾಲ್ಗೆಜ್ಜೆಯ ಇಂಪಾದ ಪ್ರೇಮ ನಿನಾದ
ಹೃದಯದಲಿ ಒಲುಮೆಯ ಉನ್ಮಾದದ ಸುನಾದ

ಮಿಡಿಯುತಿದೆ ಮತ್ತೊಮ್ಮೆ ಒಲವಿನ ಶೃಂಗಾರದ ಶೃತಿ
ಕೊನೆಯಿಲ್ಲ ಓ ಗೆಳತಿ ಎಂದೆಂದಿಗೂ ನನ್ನ ನಿನ್ನ ಪ್ರೀತಿ
ಅಗೋ ನೋಡು ಬಾನಲ್ಲಿ ಪ್ರೀತಿಸುವ ಹಕ್ಕಿ ಸಾಲ
ಬಾ ಸೇರೋಣ ಅಲ್ಲಿ ಜಗದಲಿ ಪ್ರೀತಿಯೇ ಎಲ್ಲಕ್ಕಿಂತ ಮೇಲು

‪ಈ‬ ‪‎ದಿನದ‬ ‪ಸೂರ್ಯ

ಈ‬ ‪‎ದಿನದ‬ ಸೂರ್ಯ ಏಕೋ ನನ್ನನ್ನು ಕಟ್ಟಿ ಹಾಕಿದ್ದಾನೆ,
 ಹೇಳಲು ಸಾವಿರ ಮಾತಿದೆ,
ಆದರೆ ಗಂಟಲಿನ ಕತ್ತಲು ಕೊಳವೆಯಲಿ ಸಿಕ್ಕಿಹಾಕಿಕೊಂಡಿವೆ.ಈ ದಿನದ ಬೆಳಕಿಗೆ ಎಂತ ವ್ಯಾಮೋಹವೋ ನಾ ಕಾಣೆ.
ನನ್ನ ಮನದಂತೆ ಈ ಹಗಲು ಕೂಡ ಹೊರಗೆ ಬೋರ್ಗರೆವ ಬೆಳಕು,
ಒಡಲಾಳದಲ್ಲಿ ಅನೇಕ ಶತಮಾನಗಳ ನೋವು ಕಾಪಿಟ್ಟುಕೊಂಡು ಕೂತಿರುವ ಅನಾಮಿಕ ಕಡಲು.
ಬೆಳಕಿನ ಒಳಗೆ ಅನೇಕ ಬಣ್ಣಗಳು, ನನ್ನ ಮನದ ಹಾಗೆ.



ಪ್ರತಿದಿನವೂ ನಾ ಹೇರಿಕೊಂಡ ಕಸುಬಿನಿಂದ- 
ಈ ಬೆಳಗುವ ಸೂರ್ಯನ ಕಣ್ತಪ್ಪಿಸಿ ಬದುಕು ಓಡುವುದನ್ನ ರೂಡಿಸಿಕೊಂಡಿದ್ದೆ, 
ಆದರೆ ಇಂದೇಕೋ ಮನವು ಬೆಳಕಿನ ತೊಟ್ಟಿಲಿನಲಿ ಮಲಗಿ,
ಭಾವಗಳ ಮೆರವಣಿಗೆಯಲಿ ಮದವೇರಿ ಹುಚ್ಚನಂತೆ ತಿರುಗಬೇಕೆನಿಸುತ್ತಿದೆ.
ಇದಕ್ಕೆ ಅವಳೇ ಕಾರಣವಿರಬೇಕೆನೋ?
ಕಾಣದ ಅವಳ ಬಿಂಭದ ಹುಚ್ಚನ್ನು ಮದವೇರಿಸಿಕೊಂಡಿರುವ ನನಗೆ ತೀರದ ಮೌನ ಇನ್ನು ಮರೀಚಿಕೆ.
ಓ ಸೂರ್ಯನೇ ಮನದ ಮೂಲೆಯಲಿ ಒರಗಿ ಬಿದ್ದಿರುವ ದಶಕಕಗಳ ಕನಸುಗಳಿಗೆ ಮುಕ್ತಿ ಕೊಡು,
ಆಡದೆ ಉಳಿದಿರುವ ಸಾವಿರ ಮಾತುಗಳಿಗೆ ಶಕ್ತಿಕೊಡು.
ನನ್ನೊಲವಿಗೆ ಒಂದು ಚಿರಂತನ ಬೆಳಕು ನೀಡು.