Tuesday, 27 January 2015

ಚಾಲುಕ್ಯರು

ಚಾಲುಕ್ಯರು : ವೈಷ್ಣವರ(ಆರ್ಯರ) ಹೆಡೆಮುರಿ ಕಟ್ಟಿ ಅಖಂಡ ಕರುನಾಡಲ್ಲಿ ಸ್ವತಂತ್ರವಾಗಿ ಅಳಿದವರಲ್ಲಿ ಚಾಲುಕ್ಯರು ಮೊದಲಿಗರು. ನಮ್ಮತನ, ಸ್ವಾಭಿಮಾನ, ಸಂಸ್ಕೃತಿ ಮತ್ತು ಈ ನೆಲ ಜಲದ ಅನಪೆಕ್ಷಿತ ಪ್ರಭುಗಳಾಗಿ ಇವರುಗಳು ಮೆರೆದವರು. ಈಗಿನ ಮಹಾರಾಷ್ಟ್ರ ಅಂದ್ರಪ್ರದೇಶ್ ಮತ್ತು ಗುಜರಾತಗಳಲ್ಲಿ ಕನ್ನಡಿಗರ ಕೀರ್ತಿ ಪತಾಕೆಯನ್ನ ಹಲವು ಶತಮಾನಗಳವೆರೆಗೂ ನಿರಂತರವಾಗಿ ಹಾರಿಸಿದ್ದು ಇದೆ ನಮ್ಮ ಚಾಲುಕ್ಯರು. ಚಾಲುಕ್ಯರ ಸೈನ್ಯದ ಹೆಸರೇ ಕರ್ನಾಟಕದ ಬಲ ಎಂಬುದಾಗಿತ್ತು. ಉತ್ತರದ ನರ್ಮದೆಯಿಂದ ಹಿಡಿದು ಇಂದಿನ ಕಾವೇರಿಯವರೆಗೂ ಕನ್ನಡ ದೇಶವು ವಿಶಾಲವಾಗಿ ಹರಡಿತ್ತು. ಆರ್ಯರ ದಬ್ಬಾಳಿಕೆಯನ್ನ ವ್ಯವಸ್ಥಿತವಾಗಿ ಹತ್ತಿಕ್ಕಿ ಮಾಲ್ವ, ಲಾಟ ಪ್ರತಿಹಾರರು ಮತ್ತು ಗುರ್ಜರ ಸದ್ದಡಗಿಸಿ ಕನ್ನಡ ದೇಶದಲ್ಲಿ ಶಾಂತಿಯಿತವಾಗಿ ಹಲವಾರು ಶತಮಾನಗಳವರೆಗೂ ಕಾಪಾಡಿಕೊಂಡು ಬಂದವರು. ಉತ್ತರದಲ್ಲಿ ಗುಜರಾತಿನ ಮೂಲೆಯಲ್ಲಿ ಮುಸ್ಲಿಮರ ದಾಳಿಯನ್ನು ಸದೆಬಡಿದು ಕನ್ನಡಿಗರ ಕೀರ್ತಿ ಪತಾಕೆಯನ್ನ ದಶ ದಿಕ್ಕುಗಳಲ್ಲಿ ಮಾರ್ದನಿಸುವಂತೆ ಮಾಡಿದವರು ಈ ನಮ್ಮ ಚಾಲುಕ್ಯರು. ದ್ರಾವಿಡ ಶೈವ ಸಂಸ್ಕೃತಿಯನ್ನ ಎತ್ತಿ ಹಿಡಿದು ನಮ್ಮ ಮೂಲ ಸಂಸ್ಕೃತಿಯನ್ನ ಕಾಪಾಡಿದವರು ಈ ಚಾಲುಕ್ಯರು. ನರ್ಮದಾ ನದಿಯ ತಟದಲ್ಲಿ ಉತ್ತರದ ಪರಮೇಶ್ವರ ಎಂದು ಮೆರೆಯುತ್ತಿದ್ದ ಆರ್ಯರ ಹರ್ಶವರ್ದನನ ಸೋಲ್ಲನ್ನದಗಿಸಿ ಪರಮೇಶ್ವರ ಎಂಬ ಬಿರುದು ಪಡೆದವರು ಈ ಚಾಲುಕ್ಯರು. ಅಂತಹ ಸಾಮ್ರಾಜ್ಯ ಮತ್ತು ಆ ಅರಸರುಗಳ ಚರಿತ್ರೆಯನ್ನ ಬಂಗಾರದ ಅಕ್ಷದಲ್ಲಿ ಓದಬೇಕಾಗಿದ್ದ ನಾವುಗಳು ಇಂದು ಅದು ಬಿಟ್ಟು ಎಲ್ಲಿನವನೋ ಆದ ಚಂದ್ರಗುಪ್ತ ಚಾಣಕ್ಯ ಶಿವಾಜಿ ಪ್ರತಾಪ್ ಹೀಗೆ ಹಲವಾರು ಪರಕೀಯರ ಹೇರಿಕೆಯಿಂದಾಗಿ ನಮ್ಮ ನಾಡ ಪ್ರಭುಗಳ ಸಂಸ್ಕೃತಿ ಜೊತೆಗೆ ನಮ್ಮ ಹಿರಿಮೆ ಸವೆದು ಹೋಗ್ತಾ ಇರೋದು ವಿಷಾದನೀಯ. 

No comments:

Post a Comment