ಮನಸ್ಸಿನ ಗಾಯ
ಮನಸ್ಸು ಮೌನಿಯಾದಾಗ ಭಾವನೆ ಹರಿದಾಡುತ್ತದೆ
ಭಾವನೆಯಲ್ಲಿ ನೀರವತೆ ಎದ್ದಾಗ ಕನಸು ಚಿಗುರೊಡೆಯುತ್ತದೆ !
ಭಾವನೆ ಲೋಕದಲಿ ಬಿಂಭದ ಭಿಭಿತ್ಸತೆ ಕಂಡಾಗ
ಕನಸಿನ ಲೋಕದ ಹಂದರವು ತುಮುಲದಲ್ಲಿ ಒದ್ದಾಡುತ್ತದೆ !
ಕಲ್ಪನೆಯ ಕಂದಕದಲಿ ಕಡುಬಿಸಿಲಿನ ನೆರಳಿನ ನೆರಳಿನಲ್ಲಿದ್ದಾಗ
ಮನಸ್ಸು ಪುಟಿಯುತ ಆಕಾಶದೆತ್ತರಕೆ ಹೋಗಿ ಚಿತ್ಕರಿಸುತ್ತದೆ !
ಕಾಳರಾತ್ರಿಯ ಮರಳಿನ ಮೇಲೆ ಚಿತ್ರ ಬಿಡಿಸಿದಾಗ
ಸತ್ಯದ ಪ್ರೇತವು ಒಂದಾಗಿ ಚಿದ್ರಕಲ್ಪನೆಯಲಿ ಹೂಂಕರಿಸುತ್ತವೆ!
ಭಾವನೆ ಭಾವಲೋಕದಿಂದ ದೊಪ್ಪೆಂದು ಬಿದ್ದಾಗ
ಆದ ಗಾಯದ ಗುರುತು ಮನಸ್ಸಿನಾಳದಿ ಎಂದೆಂದೂ ಹಚ್ಚಹಸಿರು !!

No comments:
Post a Comment