Monday, 5 March 2012

ಮನಸ್ಸಿನ ಗಾಯ


                           ಮನಸ್ಸಿನ ಗಾಯ 



ಮನಸ್ಸು ಮೌನಿಯಾದಾಗ ಭಾವನೆ ಹರಿದಾಡುತ್ತದೆ 
ಭಾವನೆಯಲ್ಲಿ ನೀರವತೆ ಎದ್ದಾಗ ಕನಸು ಚಿಗುರೊಡೆಯುತ್ತದೆ !


ಭಾವನೆ ಲೋಕದಲಿ ಬಿಂಭದ ಭಿಭಿತ್ಸತೆ ಕಂಡಾಗ 
ಕನಸಿನ ಲೋಕದ ಹಂದರವು ತುಮುಲದಲ್ಲಿ ಒದ್ದಾಡುತ್ತದೆ !


ಕಲ್ಪನೆಯ ಕಂದಕದಲಿ ಕಡುಬಿಸಿಲಿನ ನೆರಳಿನ ನೆರಳಿನಲ್ಲಿದ್ದಾಗ 
ಮನಸ್ಸು ಪುಟಿಯುತ ಆಕಾಶದೆತ್ತರಕೆ ಹೋಗಿ ಚಿತ್ಕರಿಸುತ್ತದೆ !


ಕಾಳರಾತ್ರಿಯ ಮರಳಿನ ಮೇಲೆ ಚಿತ್ರ ಬಿಡಿಸಿದಾಗ 
ಸತ್ಯದ ಪ್ರೇತವು ಒಂದಾಗಿ ಚಿದ್ರಕಲ್ಪನೆಯಲಿ ಹೂಂಕರಿಸುತ್ತವೆ!


ಭಾವನೆ ಭಾವಲೋಕದಿಂದ ದೊಪ್ಪೆಂದು ಬಿದ್ದಾಗ 
ಆದ ಗಾಯದ ಗುರುತು ಮನಸ್ಸಿನಾಳದಿ ಎಂದೆಂದೂ ಹಚ್ಚಹಸಿರು !!

No comments:

Post a Comment