Tuesday, 24 August 2021

ತುಳುವಿಗೆ ಲಿಪಿ ಇಲ್ಲ.


 #ತಪ್ಪು_ಮಾಹಿತಿ #ಪ್ರಜಾವಾಣಿಯಲ್ಲಿ ಬಂದದ್ದು!. 

ಕನ್ನಡ ಶಾಸನ ಗುಂಪಿನಿಂದ ಸಂಶೋಧಕ ಶಾಮಸುಂದರವರು - ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಹೇಳುವ ಗುಣವಂತೆಯ ಶಾಸನ ತುಳುಭಾಷೆಯ ಶಾಸನ ಅಲ್ಲ. 

ಅದು ತಿಗಳಾರಿ ಲಿಪಿಯಲ್ಲಿರುವ ಸಂಸ್ಕೃತ ಮತ್ತು ಕನ್ನಡದ ದ್ವಿಭಾಷಾ ಶಾಸನವಾಗಿದೆ.

ಯಾವಾಗ ಭಾಷೆಯ ಅಂದ ಭಾವದಿಂದ ಇತಿಹಾಸವನ್ನ ನೋಡಲು ಹೋದಾಗ ಈ ರೀತಿಯಾದ ತಪ್ಪುಗಳು ಘಟಿಸುತ್ತವೆ, ತುಳುವಿಗರು ಕನ್ನಡವನ್ನ ವಿರೋಧಿಸುವ ಬರದಲ್ಲಿ ತುಗಳಾರ ಲಿಪಿಯನ್ನ ತಮ್ಮ ಲಿಪಿಯೆಂದು ಹೇಳುವದು ಹಾಸ್ಯಾಸ್ಪದವಾಗಿದೆ.

ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಭಟ್ಕಳ ಸಮೀಪದ ಗುಣವಂತೆಯ ಶಂಭುಲಿಂಗೇಶ್ವರ ದೇಗುಲದ ಹೊರಾಂಗಣದಲ್ಲಿ ತುಳು ಭಾಷೆಯ ದೊಡ್ಡ ಶಾಸನ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಶಾಸನದ ಉದ್ದಗಲಗಳ ಅಳತೆ ತಿಳಿಸಿರುವ ಅವರು ಶಾಸನದ ಕಾಲ, ಯಾವ ರಾಜವಂಶದ ಯಾವ ರಾಜನ ಶಾಸನ, ಶಾಸನದ ವಿಷಯವಸ್ತು ಏನು ಇತ್ಯಾದಿ ವಿವರಗಳನ್ನು ತಿಳಿಸಿಲ್ಲ. ಶಾಸನವು ತುಳು ಲಿಪಿಯಲ್ಲಿ ಮತ್ತು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಸಿದ್ದಾರೆ.

ವಾಸ್ತವವಾಗಿ ಈ ಶಾಸನ ತಿಗಳಾರಿ ಲಿಪಿಯಲ್ಲಿರುವ ಸಂಸ್ಕೃತ ಮತ್ತು ಕನ್ನಡದ ದ್ವಿಭಾಷಾ ಶಾಸನವಾಗಿದೆ. ಈ ಶಾಸನವನ್ನು ಡಾ. ಎಚ್. ಆರ್. ರಘುನಾಥ ಭಟ್ಟ ಅವರು ಮೊದಲಿಗೆ ಅಧ್ಯಯನಮಾಡಿ ಇದು ತಿಗಳಾರಿ ಶಾಸನ ಎಂದು ತಿಳಿಸಿದ್ದಾರೆ. 1991ರಲ್ಲಿ Journal of the Epigraphical Society of India ( Bharatiya Purabhilekha Patrika) Vol 17 ರಲ್ಲಿ "A Tigalari Inscription From Gunavante" ಎನ್ನುವ ಶೀರ್ಷಿಕೆಯಲ್ಲಿ ಪ್ರಬಂಧವನ್ನು ಪ್ರಕಟಿಸಿ ಶಾಸನವನ್ನು ಸವಿಸ್ತಾರವಾಗಿ ಚರ್ಚಿಸಿದ್ದಾರೆ.

ಗುಣವಂತೆಯ ಶಂಭುಲಿಂಗೇಶ್ವರ (ಗುಣವಂತೇಶ್ವರ) ದೇವಾಲಯದ ಬಳಿಯಿರುವ ತಿಗಳಾರಿ ಲಿಪಿಯ ಶಾಸನ ಕನ್ನಡ ಭಾಷೆಯಲ್ಲಿದೆ. ಇದು ವಿಜಯನಗರದ ವೀರ ಹರಿಹರರಾಯನ ಮಗ ವೀರ ಪ್ರತಾಪದೇವರಾಯನು ವಿಜಯ ನಗರ ಸಾಮ್ರಾಜ್ಯವನ್ನು ಆಳುತ್ತಿದ್ದಾಗ ಇಚ್ಚಪ್ಪ ಒಡೆಯನು ಪುರಂಧರಪುರಿ ಶ್ರೀಪಾದರ ಶಿಷ್ಯ ಮಹೇಂದ್ರಪುರಿ ಶ್ರೀಪಾದರಿಗೆ ಭೂಮಿ ಹಾಗೂ ಹಣ ದಾನ ನೀಡಿದ ವಿಷಯ ತಿಳಿಸುತ್ತದೆ.

ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಈ ತಿಗಳಾರಿ ಶಾಸನವನ್ನು ತುಳು ಶಾಸನ ಎಂದು ಯಾಕೆ ಹೇಳುತ್ತಾರೆ ಎನ್ನುವುದಕ್ಕೆ ಅವರ ವರದಿಯ "ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ತುಳು ಶಾಸನಗಳ, ಹಸ್ತಪ್ರತಿಗಳ ಐತಿಹಾಸಿಕ ಆಕರಗಳೂ ಅವಶ್ಯ". ಈ ಸಾಲು ಗಮನಿಸುವಂತದ್ದು. ತುಳು ಭಾಷೆಯ ಅನುಕೂಲಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ತಿಗಳಾರಿ ಶಾಸನಗಳನ್ನು ತುಳು ಶಾಸನಗಳೆಂದು ಪ್ರತಿಪಾದಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ತುಳು ಶಾಸನಗಳು ದೊರೆತಿಲ್ಲ. ತುಳುನಾಡಿನ ಬಹುಭಾಗವನ್ನು ಬಹುಕಾಲ ಆಳಿದ ಅಳುಪರ ಐದು ಶಾಸನಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರೆತಿವೆ. ಅವು ಕೂಡ ಕನ್ನಡ ಭಾಷೆಯಲ್ಲಿವೆ ಎನ್ನುವುದು ಗಮನಾರ್ಹ. ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರೆತ ತುಳು ಶಾಸನಗಳು ಎನ್ನುವವೆಲ್ಲ ತಿಗಳಾರಿ ಲಿಪಿಯಲ್ಲಿರುವ ಕನ್ನಡ ಮತ್ತು ಸಂಸ್ಕೃತ ಭಾಷೆಯ ಶಾಸನಗಳಾಗಿವೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಉತ್ತರ ಕನ್ನಡ ಜಿಲ್ಲೆಯ ಅಸ್ಮಿತೆಯ ಭಾಗವಾಗಿರುವ ತಿಗಳಾರಿ ಶಾಸನಗಳನ್ನು ತುಳು ಶಾಸನಗಳು ಎಂದು ವರದಿ ಮಾಡುವುದು ಖಂಡನೀಯ.

https://www.prajavani.net/district/udupi/tulu-lipi-shasana-693304.html


#Tuluinsctription #kannadascript #tululanguage

Monday, 5 October 2020


 

Mundaragi Bheemaraya.

ಭಾರತದ ಮೊದಲ ಸ್ವಾತಂತ್ರ್ಯ ದಂಗೆಯಲಿ ಉತ್ತರದವರಷ್ಟೇ ಅಲ್ಲ ದಕ್ಷಿಣದವರು ಕೂಡ ಸಾಕಷ್ಟಿದ್ದಾರೆ ಅದರಲ್ಲಿ ಕರುನಾಡಿನ ಕಿಡಿಗಳು ಪ್ರಜ್ವಲಿಸಿದ್ದು ಹಲವಾರು ಅಂತಹ ಕಿಡಿಗಳಲ್ಲಿ ಮೊದಲು ಜಗಮಗಿಸಿದ್ದು ಮುಂಡರಗಿಯಲ್ಲಿ, ಆ ಮುಂದರಿಗಿಯ ಸಿಂಹದ ಹೆಸರೇ ಭೀಮರಾಯ - ಮುಂಡರಗಿ ಭೀಮರಾಯ , ಭೀಮರಾಯನು ರಾಜನಲ್ಲ, ರಾಜವಂಶಸ್ಥನೂ ಅಲ್ಲ, ದೇಸಾಯಿಯೂ ಅಲ್ಲ. ಮಾತೃಭೂಮಿಯ ಸರ್ವಸಂಪತ್ತೂ ಅನ್ಯರ ಪಾಲಾಗಿ, ಧರ್ಮ, ಸಂಸ್ಕೃತಿಗಳ ನಾಶವಾಗಿ ದೇಶ ಬಾಂಧವರು ಪರರ ಆಳಾಗುವರಲ್ಲ ಎಂಬ ದೇಶಪ್ರೇಮದಿಂದ ಇಂಗ್ಲಿಷರ ವಿರುದ್ಧ ಬಂಡೆದ್ದ ವೀರ. ಅವನು ಒಬ್ಬ ಸಾಮಾನ್ಯ ಪ್ರಜೆ. ಸಹಸ್ರಾರು ದೇಶಭಕ್ತರನ್ನು ಸಂಘಟಿಸಿದ ಪುರುಷಸಿಂಹ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡಾಗ ಕರ್ನಾಟಕದ ಅನೇಕ ಮಹಾರಾಜರುಗಳು ಕೈಕಟ್ಟಿ ಕುಳಿತಿದ್ದಾಗ ಜನತೆಯ ಪ್ರತಿನಿಧಿಯಾಗಿ ಕೈಯಲ್ಲಿ ಶಸ್ತ್ರ ಹಿಡಿದುನಿಂತು ಹೋರಾಡಿ ಮಡಿದ ಧೀರಪುರುಷ ಮುಂಡರಗಿ ಭೀಮರಾಯ ! ಇವನ ಧೀರೋದಾತ್ತ ಜೀವನ ಹೋರಾಟ, ಸಮಯ ಸ್ಫೂರ್ತಿಗಳು ಎಲ್ಲ ಕಾಲಕ್ಕೂ ನವಚೇತನವನ್ನು ಹೊಮ್ಮಿಸುವುದರಲ್ಲಿ ಸಂದೇಹವಿಲ್ಲ !

https://youtu.be/picaNUM-8wc 

Thursday, 27 September 2018

ಬರಗಾಲದ ಪ್ರೀತಿ

ಬರಗಾಲದ ಬಿರುಬಿಸಿಲಲಿ ನಿಂತು
ನಾ ಪರಿತಪಿಸುತ್ತಿದ್ದೆ...
ಎಲ್ಲಿಂದಲೋ ನೀನು ನನಗಾಗಿಯೇ ಎಂಬಂತೆ..
ತೇಲಿ ಬಂದೆ..
ಮಾತಿಲ್ಲದೆ ಮಳೆಯಾಗಿ ಹನಿದೆ!!
ನಿನ್ನೊಲವಿನಲಿ ನಾನು ನೆನೆದು
ಮಣಿದದ್ದು ಹೌದಾದರೂ..
ಮತ್ತೆಲ್ಲಿ ನೀ ಮರೆಯಾಗುವೆಯೋ ಎಂದು
ಕಂಗಾಲಾಗಿರುವೆ.
ನಿರಾಸೆಗಳೇ ತುಂಬಿದ್ದ ದಾರಿಯಲ್ಲಿ
ಅಯಾಚಿತವಾಗಿ ಎದುರಾದ ಆಸೆ ದೀಪ ನೀನು
ಮಾಯದ ಗಾಳಿಗೆ ಆರಿಹೋಗುವೆಯೇನೋ
ಎಂಬುವುದೇ ನನ್ನ ದಿಗಿಲು...
ದಾರಿ ನಿಚ್ಚಳವಿಲ್ಲ.. ಗುರಿಯಂತು
ಮೊದಲೇ ಇಲ್ಲ..
ಏಕಾಂಗಿ ಪಯಣಿಗಳು ನಾ
ಬೆರಳು ಬೆಸೆಯಲು ಕೂಡ ಜತೆಗೊಬ್ಬರಿಲ್ಲ..
ಹಾಗಿರಲು
ನೀ ಬಂದೆ ಸಹಚಾರಿಯಾಗಿ
ಸೋತ ಒಡಲಿಗೆ ತೋಳಿನಾಸರೆಯಾಗಿ..
ಬಳ್ಳಿಯಂತೆ ನಿನ್ನನ್ನೇ ನಾ ಬಳಸಿ ಹಿಡಿದಿರುವೆ....
ಆದರೂ ಎದೆಯೊಳಗೆ
ಎಲ್ಲಿ ನೀ ನನ್ನ
ಕೊಡವಿಬಿಡುವೆಯೋ ಎಂಬ ತಲ್ಲಣವೇ ಇದೆ. 




Shivanna Gundanavar

Monday, 3 August 2015

ನನ್ನ ಹಾಡು

ಹಾಡೊಂದು ಬರೆಯಲು ಕುಳಿತೆ ಬರಿದಾದ ಮನವ ತೆರೆದಿಟ್ಟು
ಬರಿ ಕಲ್ಪನೆಗಳೇ ಇಲ್ಲಿ ಭಾವದ ಮಳೆ ಇನ್ನೆಲ್ಲಿ?
ಎಂದೋ ಕಂಡ ನಕ್ಷತ್ರದ ನೆನಪಿಲ್ಲ
ಅದರ ಬಾವಕೆ ತೊಯ್ದ ಮನಸ್ಸಿಲ್ಲ
ಎಲ್ಲವೂ ಕುರುಡು, ಕಾಲಿ ಕಲ್ಪನೆಗಳು ಮಾತ್ರ
ವಾಸ್ತವದ ಜಾಡು ಹಿಡಿದು , ಕನಸುಗಳನ್ನೆಲ್ಲ ಕಡಿದು !!
ಹೊರಟಿಹೆ ಕಾಣದೂರಿಗೆ , ಕಂಡ ಕಣ್ಣಿರಿದೆ ಜೊತೆಗೆ !!! ಹೆಸರು ಶಿವಾನಂದ್ ಉಸಿರು ಕನ್ನಡ


Shivanna Gundanavar

ಹೃದಯ ಬೇಕು

ನನಗೊಂದು ಹೃದಯಬೇಕು
ಮಧುರವಾದ ಪ್ರೀತಿಗೆ ನವಿರಾದ ಮನಸ್ಸಿನ ಮುಗ್ದವಾದ ಭಾವನೆಗಳ ಹೃದಯಬೇಕು ಗೆಳತಿ!

ಕಾರಿರುಳ ರಾತ್ರಿಯಲು, ಕಡುಬೆಂಕಿಯ ನೆರಳಿನಲು ಪ್ರೀತಿಗಾಗಿ ಜೀವ ಕಾಯಬೇಕು
ನನಗೊಂದು ಹೃದಯಬೇಕು ಗೆಳೆತಿ!

ಸಾವಿರ ಸಾಗರಗಳಾಚೆ, ನೂರು ಗಿರಿಗಳ ಮೇಲೆ
ನಮ್ಮ ಒಲುಮೆಯ ಮಂಟಪ ಕಟ್ಟಬೇಕು
ಅದರಲಿ ನನ್ನ ಕಲ್ಪನೆಯ ಕನಸುಗಳನ್ನಿಟ್ಟು ಪೂಜಿಸಬೇಕು
ಕೊನೆಗೆ ಒಂದು ದಿನ!!!
ನಿನ್ನ ಪ್ರೀತಿ ಸಿಕ್ಕ ಮೇಲೆ ನಾ ಸಾಯಬೇಕು!!
ನನ್ನ ನೆನಪುಗಳ ಜೊತೆ ಕನಸುಗಳು ನಿನ್ನ ಸೇರಬೇಕು!!!

ಕಾಣದ ಪ್ರೀತಿ

ಹೃದಯದ ವಿರಹದ ದಗೆಯಲಿ ನೋವೆಲ್ಲ ಕರಗಿ
ನಭಕ್ಕೆ ಜಿಗಿದಿದೆ
ತಿಳಿ ಮುಗಿಲಲಿ ಕರಿ ಕಾರ್ಮೇಡವಾಗಿ
ಗೆಳತಿಯ ಹುಡುಕಲು ಹೊರಟಿದೆ ಒಂಟಿಯಾಗಿ
ಒಂಟಿ ಮೋಡದ ಕಣ್ಣ ಹನಿಗಳು ಧರೆಗಿಳಿಯುತ್ತಿವೆ
ಕಾಣದ ಅವಳ ಪ್ರೀತಿಗೆ ಕಂಡ ಮೋಡದ ಕಣ್ಣೀರು ಹನಿಗಳೆ ಸಾಕ್ಷಿಯಾಗಿ ನಿಂತಿವೆ
!!!!  Shivanna Gundanavar

ಹೊಸ ಭಾವಗಳು

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ತಂಪಾದ ಕನಸು ಎರಚಿ
ಬರುಡಾದ ಎದೆಯಲಿ ಹಸಿರು ಪ್ರೀತಿಯ ಗೆರೆಯನೂ ಗೀಚಿ!!
ನಿಲಿ ನಭದಲಿರುವ ಎಲೈ ಮೊಡಗಳೆ ಹೋಗದಿರಿ ಹಾಗೆ
ಹನಿಯಾಗಿ ಸುರಿಯರಿ ಬದುಕಿನ ಭಾವದ ಚಿಗುರಿನ ಮೇಲೆ!!
ಹಳೆಯ ಕನಸುಗಳು ಕೊಚ್ಚಿ ಹೋಗಲಿ ಹೋಸ ಮಳೆಯ ಹನಿಯಲಿ
ಬದುಕಿನ ದಾರಿಯಲಿ ಮತ್ತೆ ಹಳೆ ನೆನಪುಗಳು ಬರದಂತೆ ಕೊಚ್ಚಿ ಹೋಗಲಿ!!
ಹೊಸ ದಿಗಂತದ ಭಾನಿನಲಿ ತಿಳಿ ನೀಲಿ ಹೊಸಗನಸಲಿ
ಸವೆಯುವೆ ಕೊನೆವರೆಗೂ ಎಂದೂ ಮುಗಿಯದ ಹಾಡಿನಲಿ.!!!@ಶಿವಾನಂದ ಗುಂಡಾನವರ
Shivanna Gundanavar