ಕಾನನ ಜೊತೆಗೆ ನನ್ನ ಕವನ
ಹಾಡು ಬರೆಯಲೆಂದು ಹೋದೆ ಕಡಿದಾದ ಕಾಡಲ್ಲಿ
ಕಲ್ಪನೆಯ ಜಾಡು ಬಿಟ್ಟು ವಾಸ್ತವದ ಅರಿವಿದೆ ಅಲ್ಲಿ
ಕೋಕಿಲ ಗಿಳಿ ಗೊರವಂಕಗಳ ಮಧುರ ಗಾನ
ಜಿಂಕೆ ಕಡವೆ ಹೆಬ್ಬುಲಿ ಚಿರತೆಗಳ ಆವಾಸಸ್ಥಾನ
ಜುಳು ಳುಳು ಹರಿಯುವ ಜರಿಯ ಮಂಜುಳ ಗಾನ
ಫಲ ಪುಷ್ಪಗಳ ಪರಾಗದ ವಾಸನೆಯ ಹರಿವಾಣ
ಸ್ವಾರ್ಥ ಮೋಸ ವಂಚನೆಯ ವಾಸನೆ ಅಲ್ಲಿಲ್ಲ
ನೈಜತೆಯ ಮೇಲೆ ಹೊರಟಿದೆ ಅಲ್ಲಿರುವ ತರು ಲತೆಗಳೆಲ್ಲ
ಕವನದ ಕೊನೆಯ ಹಾದಿಯಲ್ಲಿ ಬಂದಿದ್ದೆ ನಾನು
ಅಲ್ಲಿ ದುತ್ತೆಂದು ಪ್ರತ್ಯಕ್ಷ್ಯವಾಯಿತು ಮರಕಡಿಯುವ ಮಶೀನು
ಮುಗಿಯುತು ಇನ್ನೆಲ್ಲಿ ಈ ನನ್ನ ಕವನಕ್ಕೆ ಕೊನೆ
ಮಾನವನ ಧುರಾಸೆಗೆ ಬಲಿಯಾಯಿತು ಈ ಕಾನನ
ಜೊತೆಗೆ ನನ್ನ ಕವನ
ಶಿವಾನಂದ್ ಗುಂಡಾನವರ
ಹಾಡು ಬರೆಯಲೆಂದು ಹೋದೆ ಕಡಿದಾದ ಕಾಡಲ್ಲಿ
ಕಲ್ಪನೆಯ ಜಾಡು ಬಿಟ್ಟು ವಾಸ್ತವದ ಅರಿವಿದೆ ಅಲ್ಲಿ
ಕೋಕಿಲ ಗಿಳಿ ಗೊರವಂಕಗಳ ಮಧುರ ಗಾನ
ಜಿಂಕೆ ಕಡವೆ ಹೆಬ್ಬುಲಿ ಚಿರತೆಗಳ ಆವಾಸಸ್ಥಾನ
ಜುಳು ಳುಳು ಹರಿಯುವ ಜರಿಯ ಮಂಜುಳ ಗಾನ
ಫಲ ಪುಷ್ಪಗಳ ಪರಾಗದ ವಾಸನೆಯ ಹರಿವಾಣ
ಸ್ವಾರ್ಥ ಮೋಸ ವಂಚನೆಯ ವಾಸನೆ ಅಲ್ಲಿಲ್ಲ
ನೈಜತೆಯ ಮೇಲೆ ಹೊರಟಿದೆ ಅಲ್ಲಿರುವ ತರು ಲತೆಗಳೆಲ್ಲ
ಕವನದ ಕೊನೆಯ ಹಾದಿಯಲ್ಲಿ ಬಂದಿದ್ದೆ ನಾನು
ಅಲ್ಲಿ ದುತ್ತೆಂದು ಪ್ರತ್ಯಕ್ಷ್ಯವಾಯಿತು ಮರಕಡಿಯುವ ಮಶೀನು
ಮುಗಿಯುತು ಇನ್ನೆಲ್ಲಿ ಈ ನನ್ನ ಕವನಕ್ಕೆ ಕೊನೆ
ಮಾನವನ ಧುರಾಸೆಗೆ ಬಲಿಯಾಯಿತು ಈ ಕಾನನ
ಜೊತೆಗೆ ನನ್ನ ಕವನ
ಶಿವಾನಂದ್ ಗುಂಡಾನವರ

No comments:
Post a Comment