Saturday, 26 January 2013

ನನ್ನ ಪರಿಚಯ

ನನ್ನ ಹೆಸರು ಶಿವಾನಂದ್ ಗುಂಡನವರ, ಮೂಲತಃ ನಾನು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದವನು. ನಾನು ನನ್ನ ಪ್ರೌಡ ಮತ್ತು ನನ್ನ ಪ್ರಾಥಮಿಕ ಶಿಕ್ಷಣವನ್ನ ನಮ್ಮೂರ ಸರ್ಕಾರೀ ಶಾಲೆಗಳಲ್ಲೇ ಮುಗಿಸಿದ್ದು ತದನಂತರ ಪದವಿಪೂರ್ವ ಶಿಕ್ಷಣವನ್ನ ಬಾಗಲಕೋಟೆಯಲ್ಲಿ ಮುಗಿಸಿದ್ದೇನೆ. ತದ ನಂತರ ನನ್ನ ಬದುಕು ಮಾಯಾ ನಗರಿಯಲ್ಲಿ, ಇಲ್ಲಿಯೇ ನನ್ನ ಪದವಿ ಶಿಕ್ಷಣ ಮುಗಿಸಿದ್ದು, ಕನ್ನಡ ಅಂದ್ರೆ ನನ್ನುಸಿರು, ಆಗಾಗ ಔಟಿಂಗ ಎಂಬ ಪದವನ್ನ ನಾನು ನನ್ನದೆಯಾದ ರೀತಿಯಲ್ಲಿ ಬಳಸಿ  ಆ ವೇಳೆಯಲ್ಲಿ ಕೆಲವೊಂದು ಸಣ್ಣ ಕನ್ನಡ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇನೆ ಮತ್ತು ಭಾಗಿಯಾಗಿದ್ದೇನೆ. ಹಾಗೆಯೇ ಸಣ್ಣ ಪುಟ್ಟ ಸಾಮಾಜಿಕ ಕಳಕಳಿ ಇರುವ  ಕಾರ್ಯಕ್ರಮಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಆಗಾಗ ಬಿಡುವು ಸಿಕ್ಕಾಗ ಮನದ ಭಾವನೆಗಳನ್ನ ಬರಹ ರೂಪಕ್ಕೆ ತರ್ತಾ ಇರತೇನೆ, ಹಾಗೆ ತಂದ ಬರಹಗಳನ್ನ ಕೆಲವೊಂದು ಈ ಬ್ಲಾಗಿನ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ. ತಪ್ಪಿದ್ದರೆ ತಿದ್ದಿ ಹೇಳಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.